ಪೂರ್ಣಿಮಾ ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ಡಾ|| ರಾಜ್ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ “ಅಣ್ಣಾಬಾಂಡ್ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಇತ್ತೀಚೆಗೆ ನಗರದಲ್ಲಿ ಮುಕ್ತಾಯಗೊಂಡಿತು.
ಇಪ್ಪತ್ತು ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ ಪುನೀತ್ ರಾಜ್ಕುಮಾರ್, ಜಾಕಿಶ್ರಾಫ್, ಪ್ರಿಯಮಣಿ, ನಿಧಿ ಸುಬ್ಬಯ್ಯ, ಅವಿನಾಶ್, ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಹಾಗೂ ಡಿಪರೆಂಟ್ ಡ್ಯಾನಿ, ರವಿವರ್ಮ ಸಾಹಸ ನಿರ್ದೇಶನದಲ್ಲಿ ಎರಡು ಹೊಡೆದಾಟದ ಸನ್ನಿವೇಶಗಳನ್ನು ಮುತ್ತೆತ್ತಿ, ಮೇಲುಕೋಟೆ, ಮೈಸೂರು, ತಾವರೆಕೆರೆ, ಬೆಂಗಳೂರು ಸುತ್ತಮುತ್ತ ಸತ್ಯಹೆಗ್ಡೆ, ಛಾಯಾಗ್ರಹಣದಲ್ಲಿ ನಿರ್ದೇಶಕ ಸೂರಿ ಚಿತ್ರೀಸಿಕೊಂಡರು.
ಮೂರನೇ ಹಾಗೂ ಅಂತಿಮ ಹಂತದ ಚಿತ್ರೀಕರಣವು ಜನವರಿ ೩ ರಿಂದ ಆರಂಭವಾಗಲಿದೆ ಎಂದು ನಟ-ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ, ಸತ್ಯಹೆಗ್ಡೆ ಛಾಯಾಗ್ರಹಣ, ಇಮ್ರಾನ್ ನೃತ್ಯ, ರವಿವರ್ಮ ಸಾಹಸಹ, ಶಶಿಧರ್ ಅಡಪ ಕಲೆ, ದೀಪು ಎಸ್ ಕುಮಾರ್, ಸಂಕಲನ, ಗಡ್ಡ ವಿಜಯ್ ನಿರ್ದೇಶನ ಸಹಕಾರ ಚನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ್ ನಿರ್ಮಾಣ, ನಿರ್ವಹಣೆಯಿದ್ದು, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಸೂರಿ.
ತಾರಾಗಣದಲ್ಲಿ ಪುನೀತ್ ರಾಜ್ಕುಮಾರ್, ಪ್ರಿಯಾಮಣಿ, ನಿಧಿಸುಬ್ಬಯ್ಯ, ಜಾಕಿಶ್ರಾಫ್, ಚಿ|| ಗುರುದತ್, ಅವಿನಾಶ್, ಸುಮಿತ್ರಾ, ಅಚ್ಯುತ್ರಾವ್, ಜಾನ್ಕುಕ್ಕಿನ್, ಪಸುಪತಿ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ನೀನಾಸಂ ಸಂತೀಶ್, ಅಪೂರ್ವ, ಪ್ರಶಾಂತ್ ಸಿದ್ದಿ (ಹುಚ್ಚ) ಜಯಶ್ರೀ, ವರ್ಷಾಕೃಷ್ಣ ಮುಂತಾದವರಿದ್ದಾರೆ.